ಸುಗ್ಗಿ ಕಾಲ ಬಂದೈತೆ

ಸುಗ್ಗಿ ಕಾಲ ಬಂದೈತೆ
ಹಿಗ್ಗನ್ನು ತಂದು ಕೊಟ್ಟೈತೆ
ಸಂಕ್ರಾಂತಿ ಮೇಳ ಹಿಂಗೊಂದು ತಾಳ
ಹೆಜ್ಜೆಯ ಗೆಜ್ಜೆಗೆ ಕಟ್ಟೈತೆ ||
ತಂದಾನಿ ತಾನೊ ತಾನಿ ತಂದಾನೋಽಽಽಽ

ಮಲ್ಲಯ್ಯನ ನೆನೆದು
ಸೋನೆ ಮುತ್ತಲ್ಲಿ ಮುತೈದೆ ಕುಂತು
ರಾಶಿ ರಾಶಿ ರಾಗೀಯ ಬೀಸೈತೆ
ರಾಗ ತಂದು ಕೊಟ್ಟೈತೆ ||
ತಂದಾನಿ ತಾನೊ ತಾನಿ ತಂದಾನೋಽಽಽಽ

ಭತ್ತದ ಕೊಯ್ಲು ತೂಗಿ
ಕಬ್ಬಿನ ಹಾಲು ಸುರಿದೈತೆ
ಜೋಕಾಲಿ ಹಾಡನ್ನು ಹಾಡೈತೆ ||
ತಂದಾನಿ ತಾನೋ ತಾನಿ ತಂದಾನೋಽಽಽಽ

ಹಾಗೊಂದು ಕಾಲ ಹೀಗೊಂದು ಕಾಲ
ಆಡಿಪಾಡಿ ಚಿಗುರ ಬೆಳ್ಳಿ ಚುಕ್ಕಿ
ತಂದು ಕೊಟ್ಟೈತೆ ಮುತ್ತಿನ ಸಾಲು
ತುಂಬೈತೆ ಹಿಗ್ಗನ್ನು ತಂದು ಕೊಟ್ಟೈತೆ ||
ತಂದಾನಿ ತಾನೋ ತಾನಿ ತಂದಾನೋಽಽಽಽ

ಅಂಗೈಲಿ ಸ್ವರ್ಗವ ತೋರಿ
ಅಂಬರದಾಗೆ ಸೆರಗ ಹಾಸೈತೆ
ಸೊಬಗನ್ನು ತಂದು ಕೊಟ್ಟೈತೆ
ಸುವ್ವಿ ಸುವ್ವಾಲೆ ಹಾಡೈತೆ ||
ತಂದಾನಿ ತಾನೋ ತಾನಿ ತಂದಾನೋಽಽಽಽ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃತಿ ಮತ್ತು ಲಿಪಿಕಾರ
Next post ಹಾಮಾ ನಾಯಕ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys